ಇಂದು ಮಂಗಳವಾರ.
ಅಮವಾಸ್ಯೆ ದಿನ ಕೂಡ.
ಬೆಳಿಗ್ಗೆ ಎಡಗಡೆ ಮಗ್ಗಲಿಂದ ಬೇರೆ ಎದ್ದಿದ್ದೆ.
ಬಸ್ ನಿಂತಿರುವ ಜಾಗಕ್ಕೆ ಹೋಗ್ತಾ ಇರೋವಾಗ ಕರೀ ಬೆಕ್ಕು ಬಲಗಡೆಯಿಂದ ಎಡಗಡೆಗೆ ಹೋಯ್ತು.
ಹಾಗೇ ಮೇಲೆ ನೋಡಿದಾಗ ವಿದ್ಯುಚ್ಛಕ್ತಿ ಕಂಬದ ಮೇಲೆ ಕಾಗೆ ಕಾ ಕಾ ಅಂತು ಬೇರೆ.
ಎಡಕಾಲು ಎಡವಿತು ಕೂಡ.
ಸ್ನೇಹಿತ ಕೇಳಿದ ಎಲ್ ಹೋಗ್ತಿದ್ದೀಯ ಅಂತ.
ಮತ್ತೊಬ್ಬ ನಾನೂ ಜೊತೆಗೆ ಬರಲಾಂತ ಕೇಳ್ದ.
ಏನ್ಮಾಡ್ಲಿ ಈಗ?
ಪ್ರಯಾಣ ಮುಂದುವರೆಸಲೋ ಬೇಡವೋ ?
ಬೇಗ ಹೇಳಿ. ಬಸ್ ಹೋಗಿಬಿಡುತ್ತೆ. 😀😀
-ಸುರೇಶ್ ಹುಲಿಕುಂಟಿ
**
Comment: chandra nayar
ಎದೆಯಲ್ಲಿ ಹೃದಯ ಇದ್ದರೆ ಮುಂದೆ ನಡೆಯಿರಿ, ಇಲ್ಲದಿದ್ದರೆ ಹಿಂದಕ್ಕೆ ಹೋಗಿ.
**
Suresh Hulikunti:
ದಿನ ಭವಿಷ್ಯದಲ್ಲಿ ಆಶ್ಚರ್ಯ ಕಾದಿದೆ. ಹೊಸ ಸಂಗಾತಿಯಿಂದ ಆನಂದ ಎಂದು ಬರೆದಿದೆ. ಹೋಗದೇ ಇರಕ್ಕೆ ಆಗುತ್ತೇ?😀😀
**
Comment: Ramashesha
ಈ ಭವಿಷ್ಯಕ್ಕೂ ಆ ಅಪಶಕುನಗಳಿಗೂ ಈಗ ಲಿಂಕ್ ಸಿಕ್ಕಿತು ನೋಡಿ!! ಹೊಸ ಸಂಗಾತಿಯ ನೋಡಿ ಬಂದ ನಂತರ ನಡೆಯುವುದನ್ನು ಆ ಅಪಶಕುನಗಳು ಮುನ್ಸೂಚನೆ ಕೊಟ್ಟಿವೆ. 😜
***
end- elloo ನಡೆದದ್ದು ಅಲ್ಲ imagination thoughts documented ಸಂಟೈಂ ಇನ್ November 2024 by ಸುರೇಶ್ ಹುಲಿಕುಂಟಿ
.
go back to...
click--> LINKS TO ARTICLES
...
No comments:
Post a Comment