Friday, 30 March 2018

AVASTHE ಅವಸ್ಥೆ

 


Imagination - poem

ಕರ್ತವ್ಯ ಹೊರೆಲೇ ಬೇಕಿತ್ತು  
ಹಳ್ಳಿಗೆ ಹೋಗಲೇ ಬೇಕಿತ್ತು
ವಯಸ್ಸೂ ಮೀರಿ ಹೋಗುತ್ತಿತ್ತು
ದಾಂಪತ್ಯಕ್ಕೆ ಶರಣಾಗಬೇಕಿತ್ತು
 

ಆಗತಾನೇ ಮದುವೆ ಆಗಿದ್ದೆ
ಆದರೂ ಒಬ್ಬನೇ ಹಳ್ಳಿಯಲ್ಲಿದ್ದೆ 
ಹಳ್ಳಿಗೆ ಬರುವುದಿಲ್ಲವೆಂದವಳು
ಪಟ್ಟಣದ ನಮ್ಮನೆ ಬಿಡುವೊಲ್ಲಳು  


        ನಾನವಳನ್ನು ನೋಡಲು ತವಕಿಸುತಿದ್ದೆ
        ಆಫೀಸಿನ ರಜೆಗಾಗಿ ಕಾತರಿಸುತಿದ್ದೆ
        ಬಂದಿತು ಶುಕ್ರವಾರದಂದು ರಂಜಾನ್
        ಅಂದು ನೋಡಬಹುದೆನ್ನ ಜಾನ್



ಬಸ್ಸು ಹಿಡಿದಿದ್ದಯಾಯಿತು
ಸಿಗಲಿಲ್ಲ ಸೀಟು
ಪರವಾಗಿಲ್ಲ ಜೋರಿತ್ತು
ನನ್ನ ಹಾರ್ಟ್ ನ ಬೀಟು

         ಸಮಯ ಮುಂದೆ ಸಾಗುತ್ತಿದೆ

         ಆದರೆ ಬಸ್ಸು ಸಾಗುತ್ತಿಲ್ಲ
         ಕಾರಣ ಕೇಳಲು ಮನಸ್ಸಿದೆ
         ಆದರೆ ಧೈರ್ಯ ಮಾತ್ರ ಇಲ್ಲ


ಕರ್ನಾಟಕ ಸಾರಿಗೆಗಿಲ್ಲ 
ಸಮಯ ಪ್ರಜ್ಞೆ 
ಸಂಜ್ಞೆ ಇಲ್ಲದೆ ಏಕಸಾಮ್ಯವಾಗಿದೆ
ಸಂಸ್ಥೆಯ ಹಣ ಪೋಲಾದಂತೆ
ಸಮಯ ಕೂಡ ಪೋಲಾಗಿದೆ


         ಆಗ ಪಕ್ಕದಲ್ಲೊಬ್ಬರು ಎದ್ದರು

         ಕಾರಣ ಯಾರೋ ಕರೆದರು
         ಬಂದಿತು 
ನನಗೆ ಜೀವ
         ಮೇಕೆ ತಿಂದಂತೆ ಮೇವ

ಕೊನೆಗೂ ಹೊರಟಿತು ಬಸ್ಸು

ಜೋರಾಗಿ ಕೇಳಿಸಿತು ಠುಸ್ಸು
ಅಯ್ಯೋ! ನನ್ನ ದುರದೃಷ್ಟ
ಬೇಡವಾಗಿತ್ತು ನನಗೀ ಕಷ್ಟ


         ಬೇಸರಿಸಿ ಬಸ್ಸಿನಿಂದಿಳಿದೆ

         ಬೇರೆ ಬಸ್ಸಿಗಾಗಿ ಕಾಯಬೇಕಿದೆ  
         ಬೇರೆಲ್ಲ ಬಸ್ಸುಗಳು ಬರುತ್ತಿವೆ
         ನಮ್ಮೂರಿನವರಿನ್ನೂ ಕಾಯುತ್ತಿದ್ದಾರೆ


ಏನಿದು ಆಶ್ಚರ್ಯ!

ಬಂದಿಳಿದಳು ಸೌಂದರ್ಯ
ಇವಳೇ ಇವಳೇ ನನ್ನವಳು
ನನ್ನ ಹಾಗೆ ಊರಿನಿಂದ ಹೊರಟವಳು


         ತುಂಬಾ ಧನ್ಯವಾದ
         ಆ ದೇವರಿಗೆ 
         ಸರಿಪಡಿಸಿದಂತಹ
         ನನ್ನ ಅವಸ್ಥೆಗೆ
***
end- elloo ನಡೆದದ್ದು ಅಲ್ಲ imagination thoughts documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...

No comments:

Post a Comment