members in WhatsApp 'Senior Group'
ಸ್ನೇಹದ ಕಡಲಲ್ಲಿ ನಿಂತಿರುವ ಈ ಹಿರಿಯರ ಗುಂಪಿನ ನೆನಪಿನ ದೋಣಿಯಲ್ಲಿ ಕುಳಿತು ಪಯಣಿಸುವ ಪಯಣಿಗರ ಅಗಾಧ ಪ್ರತಿಭೆಗೆ ಎಣೆಯಿಲ್ಲ. ಅವರೆಲ್ಲರಿಗೆ ಇಂದಿನ ಅಂದರೆ ಶರತ್ ಋತುವಿನ ವಿಜಯದಶಮಿಯ ಶುಭಾಶಯಗಳು.
ದೋಣಿಯಲ್ಲಿ ತುಂಬಿದೆ....
ಬಾಲ ಗೋಪಾಲನ ಲೀಲೆ;
ಚಂದ್ರನಿಂದ ಉದುರುವ ಸಿಹಿಮುತ್ತಿನ ಸಾಹಿತ್ಯ- ರತ್ನ ವಜ್ರ ವೈಢೂರ್ಯ ಸಹಿತ;
ರಾಮಶೇಷರ ಚೊಕ್ಕ, ಚಿಕ್ಕ ಮತ್ತು ನೀಳ್ಗತೆ-ಪತ್ತೇದಾರಿ ಕಾಫಿ ಪರಿಮಳದೊಂದಿಗೆ;
ಲಕ್ಷ್ಮಣರ ಅನುಭವ;
ಬೆಟ್ಟದಷ್ಟು
ನಾ ವ್ ಕೇಳುವಷ್ಟು
ಜಯರಾಮರ ಮಧುರ ಕವನ;
ಭರದಿಂದ-ರಂಜಿಸಿ
ರಾರಾಜಿಸುವ
ವಿಜಯರ ತ್ರಿ/ಚೌ/ಷಟ್ಪದಿ;
ವಿಶ್ವವನ್ನೇ ನಗಿಸುವ ವಿಶ್ವನಾಥರ ಹಾಸ್ಯ, ವಿಡಂಬನೆಗೊಳಗೊಂಡ ವ್ಯಂಗ್ಯ ಚಿತ್ರ;
ಆದರೂ....
ಹೆಚ್ಚು ತಿಳಿಯಬೇಕಿದೆ..
ಇಂದಿರೆಯ ಅನುಭವದ ಚಿಗುರೆಲೆ;
ಶೀಲೆಯ ಚಿತ್ತಾರ;
ವೆಂಕಟ ತ್ರಯರು,
ಕೃಷ್ಣ ದ್ವಯರು,
ಗೋಪಾಲ ದ್ವಯರು,
ನಾಗ ದ್ವಯರು,
ರಾಜ ದ್ವಯರು,
ಭೀಮರ
ಮತ್ತು..
ಇನ್ನೂ ಅನೇಕರಿಂದ...
ಮೊಳಗಲಿದೆ
ಝೇಂಕಾರ...
ಎಲ್ಲದಕ್ಕೂ....
ಈ ಅನೇಕರಿಂದ
ದಶಮಿಯ
ಅರುಣೋದಯ ನಂತರ
ರಾಮ ಲಕ್ಷ್ಮಣರ
ಲಂಕಾ ವಿಜಯ ಕಂಡಂತೆ...
ಆಶಾಕಿರಣಗಳೊಂದಿಗೆ ಕಾಯೋಣ.
ರಾಮ ಜಯ ರಾಮ ಜಯ ಶ್ರೀ ರಾಮ ಜಯರಾಮ.
No comments:
Post a Comment